ನೆಮ್ಮದಿಯ ಭಾವ
Advertisement
ಶೀರ್ಷಿಕೆ:
ಬಿ.ಬಿ. ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾವಪೂರ್ಣ ಗುರುವಂದನಾ ಕಾರ್ಯಕ್ರಮ
ಸುದ್ದಿ:
ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಯಾದ ಸವದತ್ತಿಯ ಬಿ.ಬಿ ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ 2004 ಹಾಗೂ 2005ನೇ ಸಾಲಿನ ಎಸ್.ಎಸ್.ಎಲ್.ಸಿ ಯ
ವಿದ್ಯಾರ್ಥಿನಿಯರ ವತಿಯಿಂದ
ಭಕ್ತಿ ಪೂರ್ವ ಗುರುವಂದನಾ ಕಾರ್ಯಕ್ರಮವು 8/2/2026 ರಂದು ಶಾಲಾ ಆವರಣದಲ್ಲಿ ಜರುಗಿತು.
ಸುಮಾರು 20 ವರ್ಷಗಳ ನಂತರ ವಿವಿಧ ಕಡೆಗಳಲ್ಲಿ ವಿವಾಹವಾಗಿ ತಮ್ಮ ತಮ್ಮ ಬದುಕಿನಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು ಮತ್ತೆ ಒಂದೇ ವೇದಿಕೆಯಲ್ಲಿ ಸೇರುವುದು ಅಸಾಧ್ಯವೆನಿಸುವ ವಿಷಯ. ಆದರೂ ತಮಗೆ ಶಿಕ್ಷಣ ನೀಡಿದ ಶಾಲೆಗೆ ಮರಳಿ ಬಂದು ಗುರುಗಳಿಗೆ ವಂದನೆ ಸಲ್ಲಿಸಿದ ಈ ವಿದ್ಯಾರ್ಥಿನಿಯರ ನಡೆ ಶ್ಲಾಘನೀಯವಾಗಿದ್ದು, ಹೆಮ್ಮೆಯ ವಿಷಯವಾಗಿದೆ.ಹಾಗೂ ಗುರುಗಳು ವಿದ್ಯಾರ್ಥಿನಿಯರ ಭಾಂದವ್ಯ ಇನ್ನು ಬಿಗಿ ಯಾಗಿದೆ ಎಂದರೆ ಸುಳ್ಳಲ್ಲ.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರು “ಗುರುವಂದನೆ” ಎಂಬ ಪದಕ್ಕೆ ನಿಜವಾದ ಅರ್ಥ ನೀಡಿದರು. ಗುರು-ಶಿಷ್ಯ ಪರಂಪರೆಗೆ ಮೆರಗು ನೀಡುವಂತಹ ಅಪರೂಪದ ಕ್ಷಣಕ್ಕೆ ಹಳೆಯ ವಿದ್ಯಾರ್ಥಿನಿಯರು ಸಾಕ್ಷಿಯಾದರು. ತಮ್ಮ ಗುರುಗಳ ಮೇಲಿನ ಅಪಾರ ಗೌರವ, ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ ರೀತಿ
(ಗುರುಗಳ ಪಾದಕಮಲಗಳಿಗೆ ಭಕ್ತಿಯ ನಮನ ಸಲ್ಲಿಸಿದರು )ವಿದ್ಯಾರ್ಥಿನಿಯರ ನಡೆ ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು. ಕಾರ್ಯಕ್ರಮದ ಸಂದರ್ಭದಲ್ಲಿ ಗುರುಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುವಂತೆ ಮಾಡಿದ ಕ್ಷಣಗಳು ಎಲ್ಲರನ್ನೂ ಭಾವುಕರನ್ನಾಗಿಸಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ನರಗುಂದ ಸರ್ ಸೇರಿದಂತೆ ಎಲ್ಲಾ ಗುರುವೃಂದವು, “ಇಂತಹ ಕಾರ್ಯಕ್ರಮ ನಮ್ಮ ಜೀವನದಲ್ಲಿ ಹಿಂದೆಂದೂ ನಡೆದಿಲ್ಲ, ಮುಂದೆ ನಡೆಯುವ ವಿಶ್ವಾಸವೂ ಇಲ್ಲ. ನೀವು ಇತಿಹಾಸವನ್ನೇ ಸೃಷ್ಟಿಸಿದ್ದೀರಿ,” ಎಂದು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಈ ವೇಳೆ ಹಳೆಯ ವಿದ್ಯಾರ್ಥಿನಿಯರು ತಮ್ಮ ಮನದ ಅಭಿಮಾನ ಹಾಗೂ ಭಾವನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವು ಗುರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.
ಬಿ.ಬಿ. ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾವಪೂರ್ಣ ಗುರುವಂದನಾ ಕಾರ್ಯಕ್ರಮ
ಸುದ್ದಿ:
ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಯಾದ ಸವದತ್ತಿಯ ಬಿ.ಬಿ ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ 2004 ಹಾಗೂ 2005ನೇ ಸಾಲಿನ ಎಸ್.ಎಸ್.ಎಲ್.ಸಿ ಯ
ವಿದ್ಯಾರ್ಥಿನಿಯರ ವತಿಯಿಂದ
ಭಕ್ತಿ ಪೂರ್ವ ಗುರುವಂದನಾ ಕಾರ್ಯಕ್ರಮವು 8/2/2026 ರಂದು ಶಾಲಾ ಆವರಣದಲ್ಲಿ ಜರುಗಿತು.
ಸುಮಾರು 20 ವರ್ಷಗಳ ನಂತರ ವಿವಿಧ ಕಡೆಗಳಲ್ಲಿ ವಿವಾಹವಾಗಿ ತಮ್ಮ ತಮ್ಮ ಬದುಕಿನಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು ಮತ್ತೆ ಒಂದೇ ವೇದಿಕೆಯಲ್ಲಿ ಸೇರುವುದು ಅಸಾಧ್ಯವೆನಿಸುವ ವಿಷಯ. ಆದರೂ ತಮಗೆ ಶಿಕ್ಷಣ ನೀಡಿದ ಶಾಲೆಗೆ ಮರಳಿ ಬಂದು ಗುರುಗಳಿಗೆ ವಂದನೆ ಸಲ್ಲಿಸಿದ ಈ ವಿದ್ಯಾರ್ಥಿನಿಯರ ನಡೆ ಶ್ಲಾಘನೀಯವಾಗಿದ್ದು, ಹೆಮ್ಮೆಯ ವಿಷಯವಾಗಿದೆ.ಹಾಗೂ ಗುರುಗಳು ವಿದ್ಯಾರ್ಥಿನಿಯರ ಭಾಂದವ್ಯ ಇನ್ನು ಬಿಗಿ ಯಾಗಿದೆ ಎಂದರೆ ಸುಳ್ಳಲ್ಲ.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರು “ಗುರುವಂದನೆ” ಎಂಬ ಪದಕ್ಕೆ ನಿಜವಾದ ಅರ್ಥ ನೀಡಿದರು. ಗುರು-ಶಿಷ್ಯ ಪರಂಪರೆಗೆ ಮೆರಗು ನೀಡುವಂತಹ ಅಪರೂಪದ ಕ್ಷಣಕ್ಕೆ ಹಳೆಯ ವಿದ್ಯಾರ್ಥಿನಿಯರು ಸಾಕ್ಷಿಯಾದರು. ತಮ್ಮ ಗುರುಗಳ ಮೇಲಿನ ಅಪಾರ ಗೌರವ, ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ ರೀತಿ
(ಗುರುಗಳ ಪಾದಕಮಲಗಳಿಗೆ ಭಕ್ತಿಯ ನಮನ ಸಲ್ಲಿಸಿದರು )ವಿದ್ಯಾರ್ಥಿನಿಯರ ನಡೆ ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು. ಕಾರ್ಯಕ್ರಮದ ಸಂದರ್ಭದಲ್ಲಿ ಗುರುಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುವಂತೆ ಮಾಡಿದ ಕ್ಷಣಗಳು ಎಲ್ಲರನ್ನೂ ಭಾವುಕರನ್ನಾಗಿಸಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ನರಗುಂದ ಸರ್ ಸೇರಿದಂತೆ ಎಲ್ಲಾ ಗುರುವೃಂದವು, “ಇಂತಹ ಕಾರ್ಯಕ್ರಮ ನಮ್ಮ ಜೀವನದಲ್ಲಿ ಹಿಂದೆಂದೂ ನಡೆದಿಲ್ಲ, ಮುಂದೆ ನಡೆಯುವ ವಿಶ್ವಾಸವೂ ಇಲ್ಲ. ನೀವು ಇತಿಹಾಸವನ್ನೇ ಸೃಷ್ಟಿಸಿದ್ದೀರಿ,” ಎಂದು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ಈ ವೇಳೆ ಹಳೆಯ ವಿದ್ಯಾರ್ಥಿನಿಯರು ತಮ್ಮ ಮನದ ಅಭಿಮಾನ ಹಾಗೂ ಭಾವನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವು ಗುರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಗುರು-ಶಿಷ್ಯ ಸಂಬಂಧದ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.
Advertisement
Where is it happening?
Sampangiram Nagar, Bangalore, India
Event Location & Nearby Stays:
Know what’s Happening Next — before everyone else does.
Host or Publisherdeepavijay Adworld



















